ಪ್ರಚೋದನಕಾರಿ ಭಾಷಣಗಳ ಕಾರಣದಿಂದ ವಿವಾದಾಸ್ಪದ ವ್ಯಕ್ತಿಯಾಗಿದ್ದ ಪ್ರವೀಣ್ ತೊಗಾಡಿಯಾ ಮಂಗಳೂರಿ ನಲ್ಲೂ ಅದನ್ನು ಮುಂದುವರಿಸಿದ್ದಾರೆ.
ರಾಮಮಂದಿರ ನಿರ್ಮಾಣ ಹಾಗೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ವಿಚಾರವನ್ನು ಉಲ್ಲೇಖಿಸುತ್ತಾ, ‘‘ಮುಸ್ಲಿಮರು ಮಿತ್ರರೋ... ಶತ್ರುಗಳೋ...?’ ಎಂದು ನೆರೆದ ಜನರನ್ನು ಪ್ರಚೋದಿಸಿದ ಅವರು, ಜನರಿಂದ ‘ಶತ್ರುಗಳು’ ಎಂಬ ಉತ್ತರ ಪಡೆದರು. ಈ ರೀತಿ ಹಲವು ಪ್ರಶ್ನೆಗಳನ್ನು ಎಸೆಯುತ್ತಾ, ಮುಸ್ಲಿಮರನ್ನು ಹಿಂದೂಗಳ ಶತ್ರುಗಳು ಎಂದು ಸಾರ್ವಜನಿಕವಾಗಿ ಘೋಷಿಸಿದರು.
‘ಅಯೋಧ್ಯೆ ಯಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತಾರಂತೆ. ಸಾಧ್ಯವಿದ್ದರೆ ಮಕ್ಕಾದಲ್ಲಿ ಮಂದಿರ ನಿರ್ಮಿಸಲಿ’ ಎಂದು ಸವಾಲೆಸೆದರು. ‘ರಾಹುಲ್ ಗಾಂಧಿ ಸೈನ್ಯ ಪಾಕಿಸ್ತಾನದ ಜಿನ್ನಾನ ಕೆಲಸ ಮಾಡ್ತಾ ಇದೆ ಎಂದೂ ಟೀಕಿಸಿದರು ಇದನ್ನು ಓದುವ ದೇಶ ಪ್ರೇಮಿಗಳು ಉತ್ತರ ಬರೆಯಲೇಬೇಕು....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ