ಬುಧವಾರ, ಡಿಸೆಂಬರ್ 29, 2010

ಬೆಳಪುವಿನಲ್ಲಿ ಎಸ್‌ಡಿಪಿಐ ಮತಯಾಚನೆ

ಪಡುಬಿದ್ರಿ: ಜಿ.ಪಂ. ಹಾಗೂ ತಾ. ಪಂ. ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷದ ಪರವಾಗಿ ಬೆಳಪು ಪರಿಸರದಲ್ಲಿ ನೂರಾರು ಎಸ್‌ಡಿಪಿಐ ಕಾರ‍್ಯಕರ್ತರು ಪಕ್ಷದ ಅಭ್ಯರ್ಥಿಗಳನ್ನು ವಿಜಯಿ ಗೊಳಿಸುವಂತೆ ಮತಯಾಚಿ ಸಿದರು. ಈ ಸಂದರ್ಭ ಸರಿಸುಮಾರು ಐನೂರು ಎಸ್‌ಡಿಪಿಐ ಕಾರ್ಯಕರ್ತರು ಮv ಯಾಚನೆಯಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ರಹಮಾನ್ ಮಲ್ಪೆ ವರದಿ ಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯ ಶೀರೂರಿನಿಂದ ಹೆಜ ಮಾಡಿವರೆಗೆ ಜಿ. ಪಂ. ಹಾಗೂ ತಾ. ಪಂ.ನಲ್ಲಿ ೧೧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ಹದಿನೈದು ದಿನಗಳಿಂದ ನಮ್ಮ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆಯಿಲ್ಲದೆ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ನಡೆಸುತ್ತಿದ್ದಾರೆ. ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿ ಯಿಂದಾಗಿ ಜನರು ಸಹಜವಾಗಿಯೇ ಬದಲಾವಣೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಎಸ್‌ಡಿ ಪಿಐ ಪಕ್ಷದ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭ ಅಬೂ ಬಕ್ಕರ್ ಪಾದೂರು, ಅಮೀರ್ ಹಂಝ ಕಾಪು, ಹಸನಾರ್ ಕಟಪಾಡಿ, ಬಶೀರ್ ಮಲ್ಲಾರು ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ