ಬುಧವಾರ, ಜೂನ್ 08, 2011

ಪಿಎಫ್‌ಐನಿಂದ ಸಾರ್ವಜನಿಕ ಸಂದೇಶ

ಮಂಗಳೂರು, ಜೂ.8: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಯದ ವತಿಯಿಂದ ‘ಇಸ್ಲಾಮನ್ನು ಅರಿಯಿರಿ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ‘ಯಶಸ್ವಿ ಇಸ್ಲಾಮೀ ಜೀವನ’ ಎಂಬ ಸಾರ್ವಜನಿಕ ಸಂದೇಶ ಕಾರ್ಯ ಕ್ರಮವು ತೊಕ್ಕೊಟ್ಟು ಒಳ ಪೇಟೆಯ ಆಮಂತ್ರಣ ಹಾಲ್‌ನಲ್ಲಿ ನಡೆಯಿತು.ಹಾರಿಸ್ ಮುಸ್ಲಿಯಾರ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.‘‘ನೆರೆಹೊರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ’’ ಎಂಬ ಪ್ರವಾದಿ ವಚನದ ಬಗ್ಗೆ ಮಾತನಾಡುತ್ತಾ ಹಸಿವು ಎಂದರೆ ಕೇವಲ ಹೊಟ್ಟೆ ಹಸಿವು ಮಾತ್ರವಲ್ಲ. ಬದಲಾಗಿ ಅವರ ಎಲ್ಲಾ ಸಮಸ್ಯೆಗಳಿಗೆ ಜಾತಿ,ಮತ ಎಂಬ ಭೇದವನ್ನು ಮರೆತು ಭಾಗಿಯಾಗಬೇಕು ಎಂದು ದ.ಕ. ಜಿಲ್ಲಾ ಇಮಾಮ್ ಕೌನ್ಸಿಲ್‌ನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಅಝ್‌ಹರಿ ಹೇಳಿದರು.ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಉಳ್ಳಾಲ ವಲಯದ ಕಾರ್ಯದರ್ಶಿ ನಾಸಿರ್ ಮಲಾರ್ ಉಪಸ್ಥಿತರಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ