ಬುಧವಾರ, ಡಿಸೆಂಬರ್ 15, 2010

ಮಾಡೂರು ಇಸುಬು ಮುಸ್ಲಿಂ ಸಮುದಾಯದ ನೇತಾರನೂ ಅಲ್ಲ ,ಪಿ.ಎಫ್.ಐ ನಾಯಕನೂ ಅಲ್ಲ – ’ಪಿ.ಎಫ್.ಐ. ಸಭೆಯಲ್ಲಿ ಸಾದಾತ್


ಮಂಗಳೂರು: ಮಾಡೂರು ಇಸುಬು ಯಾನೆ ಯೂಸುಫ್ ನಮ್ಮ ಸಂಘಟನೆಯ ನಾಯಕನೂ ಅಲ್ಲ, ಮುಸ್ಲಿಂ ಸಮುದಾಯದ ನೇತಾರನೂ ಅಲ್ಲ. ಪೊಲೀಸರು ಆತನ ಮೂಲಕ ಪಿ.ಎಫ್.ಐ. ವಿರುದ್ಧ ಹೇಳಿಕೆ ನೀಡಿಸಿ ಅದನ್ನು ಪತ್ರಿಕೆಗಳಿಗೆ ನೀಡಿ ಜನರು ನಂಬುವಂತೆ ಮಾಡು ತ್ತಿದ್ದಾರೆ. ಇದು ನಮ್ಮ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಮೂಡಿಸುವಂತಹ ಕೆಲಸವಾಗಿದ್ದು ಜನತೆ ಇದನ್ನು ನಂಬ ಬಾರದು ಎಂದು ವಿನಂತಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಅವರು ಮೂಲ್ಕಿ ರಫೀಕ್‌ನಿಗಾದ ಗತಿಯೇ ಇಸು ಬುವಿಗೂ ಆಗಲಿದೆ ಎಂದು ಅವರು ಭವಿಷ್ಯ ನುಡಿದಿ ದ್ದಾರೆ.
ಅವರು ನಿನ್ನೆ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ಪಿ.ಎಫ್.ಐ. ವತಿಯಿಂದ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ನಿರಂತರವಾಗಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಾ ಬಂದಿರುವ ವೆಂಕಟೇಶ್ ಪ್ರಸನ್ನ ಮತ್ತವರ ತಂಡವು ಮಾಡೂರು ಯೂಸುಫ್‌ನ ಮೂಲಕ ಪಿ.ಎಫ್.ಐ. ವಿರುದ್ಧ ಹೇಳಿಕೆ ನೀಡಿಸುತ್ತಿದ್ದಾರೆ. ಇದನ್ನು ಅವಲೋಕಿಸುವಾಗ ಅವರ ತಂಡವು ಕೇವಲ ಸಂಘಪರಿವಾರವನ್ನು ಸಂತುಷ್ಟಗೊಳಿಸಲು ಮತ್ತು ಮುಸ್ಲಿಮರನ್ನು ದ್ವೇಷಿಸಲೆಂದೇ ಇಲಾಖೆಯಲ್ಲಿರುವಂತೆ ಕಾಣುತ್ತಿದೆ ಎಂದು ಸಾದಾತ್ ಕಿಡಿಕಾರಿದರು.
ಭೂಗತ ಪಾತಕಿಗಳ ಜೊತೆ ಶಾಮೀಲಾಗಿರುವ ಪ್ರಸನ್ನ ಮತ್ತವರ ತಂಡವು ರೌಡಿಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅವರು ಸಂಬಳಕ್ಕಿಂತ ಹೆಚ್ಚು ಗಿಂಬಳವನ್ನು ಪಡೆಯುತ್ತಿದ್ದು ಅವರು ಗಳಿಸಿರುವ ಅಕ್ರಮ ಆಸ್ತಿಯ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಲಾಗುವುದೆಂದು ಎಚ್ಚರಿಸಿದ ಸಾದಾತ್, ಮಾಡೂರು ಯೂಸುಫ್ ಪಿ.ಎಫ್.ಐ. ವಿರುದ್ಧ ಹೇಳಿಕೆ ನೀಡುತ್ತಿ ದ್ದಾನೆಂದು ಕೆಲವು ಪತ್ರಿಕೆಗಳಲ್ಲಿ ನಿರಂತರವಾಗಿ ವರದಿ ಬರುತ್ತಿದ್ದು ಇಂತಹ ವರದಿಗಳು ಆ ಪತ್ರಿಕೆಗಳಿಗೆ ಸಿಗುವುದಾದರೂ ಹೇಗೆಂದು ಪ್ರಶ್ನಿಸಿದ್ದಾರೆ. ವೇದಿಕೆಯಲ್ಲಿ ಪಿ.ಎಫ್.ಐ. ಉಡುಪಿ ಜಿಲ್ಲಾಧ್ಯಕ್ಷ ನೆಹಮತ್ ಅಲಿ, ಮುಖಂಡರಾದ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ