ಮಂಗಳವಾರ, ಫೆಬ್ರವರಿ 08, 2011

ಹುಸೈನ್‌ ದಾರಿಮಿ ಮೇಲಿನ ಹಲ್ಲೆ ಪ್ರಕರಣ SSF ನ ನಾಲ್ವರ ಬಂಧನ: ಆರೋಪಿಗಳಿಗೆ ಷರತು ಬದ್ದ ಜಾಮೀನು

ಪುತ್ತೂರು, ಫೆ.8: ಹುಸೈನ್‌ ದಾರಿಮಿ ರೆಂಜಲಾಡಿ ಎಂಬವರನ್ನು ಬಲಾತಾಕ್ರವಾಗಿ ಜೀಪಿನೊಳಗೆ ಹಾಕಿ ಹಲ್ಲೆ ನಡೆಸಿ ಕೂರ ಮಸೀದಿಗೆ ಕೊಂಡೊಯ್ದು ಕೂಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ನಾಲ್ವರನ್ನು ಮಂಗಳವಾರ ಬಂಧಿಸಿದ್ದಾರೆ.
ಬರೆಪ್ಪಾಡಿ ಕೂರ ಪರಿಸರದವರಾದ ರಝಾಕ್‌, ಸುಲೈಮಾನ್‌, ಅಶ್ರಫ್‌ ಮತ್ತು ಇಬಾ್ರಹೀಂ ಬಂಧಿತ ಆರೋಪಿಗಳು. ಅವರನ್ನು ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನಾ್ಯಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಹುಸೈನ್‌ ದಾರಿಮಿ ಸೋಮವಾರ ಬೆಳಿಗ್ಗೆ ರೆಂಜಲಾಡಿಯ ಮನೆಯಿಂದ ಬೈಕ್‌ನಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಭಕ್ತಕೋಡಿ ತಿರುವು ಬಳಿಯಿಂದ ಜೀಪಿನಲ್ಲಿ ಹಿಂಬಾಲಿಸಿ ಕೊಂಡು ಬಂದ ತಂಡ ಕೊಡಿನೀರು ಬಳಿ ಜೀಪನ್ನು ಬೈಕ್‌ಗೆ ಅಡ್ಡವಿಟ್ಟು ತಡೆದು ನಿಲ್ಲಿಸಿತ್ತು. ಅವರನ್ನು ಬಲಾತಾಕ್ರವಾಗಿ ಜೀಪಿಗೆ ಎಳೆದು ಹಾಕಿ ಕೂರ ಮಸೀದಿಗೆ ಕರೆದೊಯ್ದ ತಂಡ ದಾರಿಯುದ್ದಕ್ಕೂ ಕೈಯಿಂದ ಹೊಡೆದು ಚಿತ್ರಹಿಂಸೆ ನೀಡಿದೆ ಎಂದು ಆರೋಪಿಸಲಾಗಿತ್ತು.
ಕೂರ ತಂಙಳ್‌ ಮತ್ತು ಕೂರ ಮಸೀದಿ ಅಧ್ಯಕ್ಷ ಅಬೂಬಕರ್‌ ಪ್ರಚೋದನೆಯಂತೆ ಬರೆ ಪಾ್ಪಡಿಯ ಅಶ್ರಪ್‌, ಸವಣೂರಿನ ಸಲಾಂ, ಸವಣೂರು ಪಲ್ಲತಾ್ತರುವಿನ ಅಶ್ರಫ್‌ ಸೇರಿದಂತೆ 8 ಮಂದಿಯ ತಂಡವೊಂದು ಈ ಕೃತ್ಯ ಎಸಗಿರು ವುದಾಗಿ ಹುಸೈನ್‌ ದಾರಿಮಿ ರೆಂಜಲಾಡಿ ಆರೋಪಿಸಿದ್ದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ