ಬುಧವಾರ, ಜನವರಿ 12, 2011

ನನ್ನ ಮಗನನ್ನು ಎಂದೋ ಹತ್ಯೆ ಮಾಡಲಾಗಿದೆ:ರಿಯಾಝ್‌ ಭಟ್ಕಳ್‌ನ ತಾಯಿ ಸಈದಾ ಇಸ್ಮಾಯೀಲ್‌ ಪ್ರತಿಕ್ರಿಯೆ

ಭಟ್ಕಳ, ಜ.12: ‘‘ನನ್ನ ಮಗನನ್ನು ಎಂದೋ ಹತ್ಯೆ ಮಾಡಲಾಗಿದೆ. ಆತ ಅಮಾಯಕ ಹಾಗೂ ಸಭ್ಯನಾಗಿದ್ದ, ಆತನಿಗೆ ಪೊಲೀಸರು ಪದೇ ಪದೇ ನೀಡುತ್ತಿದ್ದ ಕಿರುಕುಳ ತಾಳಲಾರದೆ ಊರು ಬಿಡುವಂತಾಯಿತು. ರಿಯಾಝ್‌ನ ಹತ್ಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿ ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಏಕೆಂದರೆ ನಾನು ತಿಳಿದುಕೊಂಡಂತೆ ಎಂದೋ ಆತನ ಹತ್ಯೆಯಾಗಿದೆ’’ ಎಂದು ರಿಯಾಝ್‌ ಭಟಕ್ಳ್‌ನ ತಾಯಿ ಸಈದಾ ಇಸಾ್ಮಯೀಲ್‌ ಶಾಬಂದ್ರಿ ಮಾಧ್ಯಮಗಳ ಮುಂದೆ ತಮ್ಮ ಮನ ದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಭಟ್ಕಳಮೂಲದ ರಿಯಾಝ್‌ ಶಾಬಂದ್ರಿಯನ್ನು ಪಾಕಿಸ್ತಾನದ ಕರಾಚಿ ಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಯಲ್ಲಿ ವಾರ್ತಾಭಾರತಿ ಆತನ ತಾಯಿ ಯನ್ನು ಮಾತನಾಡಿಸಿದಾಗ ಈ ಮೇಲಿನಂತೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

ನಾನು ನಿಮ್ಮ ಹಾಗೆ ಮಾಧ್ಯಮಗಳಲ್ಲಿ ಸುದ್ದಿಯನ್ನು ಕೇಳಿದೆ ಎಂದ ಅವರು, ನನ್ನ ಮಗ ಇಂತಹ ಕೆಲಸ ಮಾಡುತ್ತಾನೆ ಎಂಬುದನ್ನು ನಾನು ಯೋಚಿಸಿಯೆ ಇಲ್ಲ, ಅವನನ್ನು ಯಾವುದೋ ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಈತನ ಮೇಲೆ ಹೊರಿಸಿದ ಆರೋಪಗಳಲ್ಲಿ ಈಗ ಬೇರೆ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿದೆ ಎಂದು ಪರೋಕ್ಷವಾಗಿ ಕೇಸರಿ ಭಯೋತ್ತಾದನೆಯನ್ನು ಪ್ರಸ್ತಾಪಿಸಿದರು. ಪೊಲೀಸರ ಕಿರುಕುಳದಿಂದಲೆ ನನ್ನ ಮಗನಿಗೆ ಕಳಂಕ ಬಂದಿತು. ಅಮಾಯಕರಿಗೆ ಕಿರುಕುಳ ನೀಡಿ ಭಯೋತ್ಪಾದಕರನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸುವ ಅವರು ರಿಯಾಝನ ಹತ್ಯೆಯ ಕುರಿತಂತೆ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಯಾವುದೇ ಮಾಹಿತಿ ಇಲ್ಲ ಎಂದರು.


ಈಗ ನನ್ನ ಕಣ್ಣೀರು ಬತ್ತಿ ಹೋಗಿದೆ. ನಾನು ಅಲ್ಲಾಹನ ಮೇಲೆ ಭರವಸೆ ಇಟ್ಟು ನನ್ನ ಮಗನ ಆಸೆ ಬಿಟ್ಟಿದ್ದೇನೆ. ಉನ್ನತ ವಿದ್ಯಾಭ್ಯಾಸ ಮಾಡಿಕೊಂಡಿದ್ದ ನನ್ನ ಇಬ್ಬರು ಮಕ್ಕಳು ಎಲ್ಲರಂತೆ ಸಮಾಜ ದಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದರು. ಮುಂಬೈಯಲ್ಲಿ ಸಿಮಿ ಕಾರ್ಯಾಲಯ ದಲ್ಲಿ ಅಭ್ಯಾಸ ಮಾಡಲು ಹೋಗುತ್ತಿರುವ ಆರೋಪದಲ್ಲಿ ನನ್ನ ಮಕ್ಕಳ ಬದುಕನ್ನೆ ಹಾಳು ಮಾಡಿದರು. ಮುಂಬೈ ಬಿಟ್ಟು ಭಟ್ಕಳಕ್ಕೆ ಬಂದ ನಮಗೆ ಇಲ್ಲಿಯೂ ಕಿರುಕುಳ ತಪ್ಪಲಿಲ್ಲ. ಪೊಲೀಸರ ಕಿರುಕುಳ ತಾಳಲಾರದೆ ನನ್ನ ಮಗ ಮನೆ ಬಿಟ್ಟು 6 ವರ್ಷಗಳು ಕಳೆದವು ಅವನು ಎಲ್ಲಿದ್ದಾನೋ ಹೇಗಿದ್ದಾನೋ ತಿಳಿಯದು. ನನಗನ್ನಿಸಿದಂತೆ ಆತನನ್ನು ಎಂದೋ ಕೊಂದು ಹಾಕಿದ್ದಾರೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ