ಮಾನ್ಯರೆ,
ಜಪಾನಿಗೆ ಬಂದೆರಗಿದ ಸುನಾಮಿಯಿಂದಾಗಿ ಅದೆಷ್ಟೋ ಜೀವಗಳು ಕಣ್ಣು ಮುಚ್ಚಿಕೊಂಡವು. ಆ ಸಮಯದಲ್ಲಿ ಅದೆಷ್ಟು ಸಂಸಾರಗಳು ತಮ್ಮವರನ್ನು ಕಳೆದುಕೊಂಡು ಅನಾಥವಾಗಿಬಿಟ್ಟವು ಎಂಬುವುದನ್ನು ದೃಶ್ಯ ಮಾಧ್ಯಮದ ಮೂಲಕ ನೋಡಿ ಅರಿತು ಕೊಂಡಿದ್ದೇವೆೆ. ಇಂತಹ ಒಂದು ಪ್ರಾಕೃತಿಕ ವಿಕೋಪಕ್ಕೆ ಜಗತ್ತಿಗೆ ಜಗತ್ತೇ ಕಣ್ಣೀರಿಟ್ಟಿತು.ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದಂತಹ ಘಟನೆಗಳಿಗೆ ನಮ್ಮವರ ಹೃದಯ ಮಿಡಿಯುತ್ತದೆ. ಅದು ಮನುಷ್ಯನ ಸಹಜ ಪ್ರವೃತ್ತಿ. ಅದರಂತೆ ಜಪಾನಿನಲ್ಲಿ ನಡೆದ ಘಟನೆಗೆ ಹೃದಯಗಳು ಮಿಡಿದವು.
ಜಪಾನಿಗೆ ಬಂದೆರಗಿದ ಸುನಾಮಿಯಿಂದಾಗಿ ಅದೆಷ್ಟೋ ಜೀವಗಳು ಕಣ್ಣು ಮುಚ್ಚಿಕೊಂಡವು. ಆ ಸಮಯದಲ್ಲಿ ಅದೆಷ್ಟು ಸಂಸಾರಗಳು ತಮ್ಮವರನ್ನು ಕಳೆದುಕೊಂಡು ಅನಾಥವಾಗಿಬಿಟ್ಟವು ಎಂಬುವುದನ್ನು ದೃಶ್ಯ ಮಾಧ್ಯಮದ ಮೂಲಕ ನೋಡಿ ಅರಿತು ಕೊಂಡಿದ್ದೇವೆೆ. ಇಂತಹ ಒಂದು ಪ್ರಾಕೃತಿಕ ವಿಕೋಪಕ್ಕೆ ಜಗತ್ತಿಗೆ ಜಗತ್ತೇ ಕಣ್ಣೀರಿಟ್ಟಿತು.ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದಂತಹ ಘಟನೆಗಳಿಗೆ ನಮ್ಮವರ ಹೃದಯ ಮಿಡಿಯುತ್ತದೆ. ಅದು ಮನುಷ್ಯನ ಸಹಜ ಪ್ರವೃತ್ತಿ. ಅದರಂತೆ ಜಪಾನಿನಲ್ಲಿ ನಡೆದ ಘಟನೆಗೆ ಹೃದಯಗಳು ಮಿಡಿದವು.
ಆದರೆ ಈ ಭಾರತ ದೇಶದಲ್ಲಿ ನಿರಂತರವಾಗಿ ಅಮಾಯಕರ ಮೇಲೆ ನಡೆಯು ತ್ತಿರುವ ದೌರ್ಜನ್ಯ, ಅತ್ಯಾಚಾರ, ಹತ್ಯೆಯಂತಹ ಘಟನೆಗಳಿಗೆ ಇಲ್ಲಿನ ಅಧಿಕಾರ ವರ್ಗಗಳು ಕಂಬನಿ ಮಿಡಿಯುತ್ತವೆಯೇ? ಅಥವಾ ಅವುಗಳನ್ನು ನಿಯಂತ್ರಿ ಸಲು ಯಾವುದಾದರೂ ಕ್ರಮ ಕೈಗೊಳ್ಳುತ್ತಿವೆಯೇ? ಖಂಡಿತಾ ಇಲ್ಲ. ಈ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗೆ ಇಂದು ಸಂಘ ಪರಿವಾರ ಎಂಬ ಘೋರವಾದ ಸುನಾಮಿ ಆವರಿಸಿದೆ. ಆದುದರಿಂದಲೇ ಇಲ್ಲಿನ ಅಮಾಯಕರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ.
ಒಂದರ್ಥದಲ್ಲಿ ಸಂಘ ಪರಿವಾರವು ಕೂಡ ಸುನಾಮಿಯಿದ್ದಂತೆ. ಅದು ತನ್ನ ಸ್ವಾರ್ಥಕ್ಕಾಗಿ ಹಾಗೂ ತನ್ನ ಹಿಂದುತ್ವ ಎಂಬ ಅಜೆಂಡಾವನ್ನು ಈ ದೇಶದಲ್ಲಿ ಜಾರಿಗೊಳಿಸುವ ಸಲುವಾಗಿ ಜನಸಾಮಾನ್ಯರನ್ನು ಬಲಿಪಡೆದುಕೊಳ್ಳಲು ಸಿದ್ಧವಾಗಿ ನಿಂತಿದೆ. ಇದರ ಜೊತೆಗೆ ಇಲ್ಲಿನ ನ್ಯಾಯಾಂಗ ವ್ಯವಸ್ಥೆಯು ಕೂಡ ಅದಕ್ಕೆ ಬೆಂಗಾವಲಾಗಿದೆ ಎಂದರೆ ಅತಿಶಯೋಕ್ತಿ ಯಲ್ಲ.ಬಾಬರಿ ಮಸೀದಿ ಧ್ವಂಸದ ನಂತರ ಭುಗಿಲೆದ್ದ ಕೋಮು ದಳ್ಳುರಿಗೆ ಅಲ್ಪ ಸಂಖ್ಯಾತ ಮುಸ್ಲಿಮರನ್ನೇ ಸಾಮೂಹಿಕ ವಾಗಿ ಹತ್ಯೆ ಮಾಡಲಾಯಿತು. ಇದರ ಮುಖಗಳು ಸುನಾಮಿಗಿಂತ ವಿಕಾರವಾದದ್ದು. ಕೊಲೆ, ಜೀವಂತ ದಹನ, ಅತ್ಯಾಚಾರ ಇತ್ಯಾದಿ ಇತ್ಯಾದಿ.
ಒಂದರ್ಥದಲ್ಲಿ ಸುನಾಮಿಗಿಂತ ಭೀಕರವಾದ ಘಟನೆಗಳು ಗುಜರಾತ್ನ ನರೋಡ ಪಾಟಿಯಾಲ ದಲ್ಲಿ ನಡೆಯಿತು. ಇಂತಹದೇ ಸನ್ನಿವೇಶವೊಂದು ಮುಂಬೈ ಗಲಭೆಗಳಲ್ಲಿ ಜೋಗೀಶ್ವರ ಆಸುಪಾಸಿನಲ್ಲಿ ವಾಸಿಸುವ ಮುಸಲ್ಮಾನರನ್ನು ಸಾಮೂಹಿಕವಾಗಿ ಹತ್ಯೆಗೊಳಪಡಿಸಲಾಯಿತು. ಊರಿಗೆ ಊರೇ ಗುಳೆ ಹೋಯಿತು. ಮುಂಬೈ ಗಲಭೆಯಲ್ಲಿ ಸಂಘ ಪರಿವಾರದ ಉಗ್ರ ನರ್ತನಕ್ಕೆ ಸಾವಿರಾರು ಮುಸ್ಲಿಂ ಕುಟುಂಬಗಳು ಬಲಿಯಾಗಿವೆ. ದೇಶದಲ್ಲಿ ನಡೆದಿರುವ ಬಾಂಬ್ ಸ್ಫೋಟಗಳನ್ನು ಸಂಘಪರಿವಾರದ ಕಾರ್ಯಕರ್ತರೇ ನಡೆಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಾಗಲೂ ಭಾರತದ ನ್ಯಾಯದ ಬಾಗಿಲುಗಳು ಮುಚ್ಚಲ್ಪಟ್ಟಿರುವಂತೆ ಗೋಚರಿಸುತ್ತಿದೆ.
ಗೋಧ್ರಾ ಘಟನೆ ಆಕಸ್ಮಿಕವೋ ಪೂರ್ವ ಯೋಜಿತವೋ ಎಂಬುದು ಸಾಬೀತಾಗುವ ಮೊದಲೇ, 11 ಮಂದಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ. ಆದರೆ ಸಾರ್ವಜನಿಕವಾಗಿ ಗುಜರಾತ್ ಹತ್ಯಾಕಾಂಡವನ್ನು ನಡೆಸಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡು ತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನೊಂದವರು ರೇಜಿಗೆ ಪಡುವಂತಾಗಿದೆ. ಇದು ನ್ಯಾಯವನ್ನಾವರಿಸಿದ ಸುನಾಮಿಯಾಗಿದೆ -ಮೇಘಾ ಕೋಟೆಕಾರ್ ಮಂಗಳೂರು krpe:vb
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ