ಮುಂಬೈ ಭಯೋತ್ಪಾದಕ ದಾಳಿಯ ವಿಚಾರಣೆಗೆ ಸಂಬಂಧಿಸಿ ಭಾರತದ ಆಯೋಗವೊಂದರ ಪಾಕಿಸ್ತಾನ ಭೇಟಿಗೆ ತಾತ್ತ್ವಿಕವಾಗಿ ಒಪ್ಪಲು ಸಿದ್ಧವೆಂದು ಪಾಕಿಸ್ತಾನ ಸಂದೇಶ ನೀಡುವುದರೊಂದಿಗೆ ಉಭಯ ದೇಶಗಳ ಗೃಹ ಕಾರ್ಯದರ್ಶಿ ಮಟ್ಟದ ಮಾತುಕತೆ ಮಂಗಳವಾರ ಕೊನೆಗೊಂಡಿದೆ. ಮುಂಬೈ ದಾಳಿಯ ವಿಚಾರಣೆಗೆ ಸಂಬಂಧಿಸಿ ಪಾಕಿಸ್ತಾನದ ನ್ಯಾಯಾಂಗ ಆಯೋಗವೊಂದರ ಭೇಟಿಯ ದಿನಾಂಕವನ್ನು ಭಾರತ 4ರಿಂದ 6 ವಾರಗಳೊಳಗೆ ನೀಡಲಿದೆ.
ಅನುಕೂಲತೆ ಹಾಗೂ ಪಾರಸ್ಪರ್ಯ ಸಿದ್ಧಾಂತದಡಿ ಮುಂಬೈ ದಾಳಿಗೆ ಸಂಬಂಧಿಸಿದ ಭಾರತೀಯ ಆಯೋಗವೊಂದರ ಭೇಟಿಯ ಬಯಕೆಯನ್ನು ಪಾಕಿಸ್ತಾನ ಪ್ರಕಟಿಸಿದೆ. ಈ ಆಯೋಗದ ಸಂರಚನೆ ಹಾಗೂ ಮಾದರಿಯ ಕುರಿತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚರ್ಚೆ ನಡೆಸಲಾಗುವುದು.
ಅನುಕೂಲತೆ ಹಾಗೂ ಪಾರಸ್ಪರ್ಯ ಸಿದ್ಧಾಂತದಡಿ ಮುಂಬೈ ದಾಳಿಗೆ ಸಂಬಂಧಿಸಿದ ಭಾರತೀಯ ಆಯೋಗವೊಂದರ ಭೇಟಿಯ ಬಯಕೆಯನ್ನು ಪಾಕಿಸ್ತಾನ ಪ್ರಕಟಿಸಿದೆ. ಈ ಆಯೋಗದ ಸಂರಚನೆ ಹಾಗೂ ಮಾದರಿಯ ಕುರಿತು ರಾಜತಾಂತ್ರಿಕ ಮಾರ್ಗಗಳ ಮೂಲಕ ಚರ್ಚೆ ನಡೆಸಲಾಗುವುದು.
ಬಂಧನದಲ್ಲಿರುವ ಮುಂಬೈ ದಾಳಿ ಪಿತೂರಿಕಾರರ ಧ್ವನಿ ಮಾದರಿಗಳನ್ನು ನೀಡಬೇಕೆಂಬ ಭಾರತದ ಬೇಡಿಕೆಯ ಬಗ್ಗೆ ಪಾಕಿಸ್ತಾನವು, ಭಾರತಕ್ಕೆ ಆರೋಪಿಗಳ ಧ್ವನಿ ಮಾದರಿಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಈ ಬಗ್ಗೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ಈ ಬಗ್ಗೆ ಶೀಘ್ರವೇ ನಿರ್ಧಾರವೊಂದನ್ನು ಕೈಗೊಳ್ಳಬಹುದು. ಪಾಕಿಸ್ತಾನ ಸರಕಾರವು ಅದರಂತೆ ನಡೆಯಲಿದೆಯೆಂದು ತಿಳಿಸಿದೆ. ಮುಂಬೈ ದಾಳಿ ವಿಚಾರಣೆಗೆ ಸಂಬಂಧಿಸಿ ಪಾಕಿಸ್ತಾನದ ನ್ಯಾಯಾಂಗ ಆಯೋಗವೊಂದರ ಭೇಟಿಯ ದಿನಾಂಕವನ್ನು ಭಾರತವು 4 ರಿಂದ 6 ವಾರಗಳೊಳಗೆ ತಿಳಿಸಲಿದೆ. ಭಾರತದ ಎನ್ಐಎ ಹಾಗೂ ಪಾಕಿಸ್ತಾನದ ಎಫ್ಐಎಗಳು ಮುಂಬೈ ದಾಳಿಯ ತನಿಖೆಯಲ್ಲಿ ಪರಸ್ಪರ ಸಹಕರಿಸಿ ಕೊಳ್ಳಲು ಉಭಯ ದೇಶಗಳ ಗೃಹ ಕಾರ್ಯದರ್ಶಿಗಳೂ ಒಪ್ಪಿಕೊಂಡಿ ದ್ದಾರೆ. ಭಯೋತ್ಪಾದನೆಯ ಬೆದರಿಕೆಯ ಬಗ್ಗೆ ತಾಜಾ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಭಾರತದ ಗೃಹಕಾರ್ಯದರ್ಶಿ ಹಾಗೂ ಪಾಕಿಸ್ತಾನದ ಆಂತರಿಕ ಕಾರ್ಯದರ್ಶಿಗಳ ನಡುವೆ ಹಾಟ್ ಲೈನೊಂದನ್ನು ಸ್ಥಾಪಿಸಲಾಗುವುದು.
ಉದಾರ ವೀಸಾ ನಿಯಮ ಪ್ರಸ್ತಾಪಗಳನ್ನೂ ಉಭಯ ದೇಶಗಳು ಒಪ್ಪಿಕೊಂಡಿವೆ. ವೀಸಾ ಉದಾರೀಕರಣ ಕಾರ್ಯಕ್ರಮದ ಬಗ್ಗೆ ಮಾರ್ಗ ಸೂಚಿಯನ್ನು ಶೀಘ್ರವೇ ರಚಿಸಲಾಗುವುದು. ಅಲ್ಲಿಯವರೆಗೆ ವೀಸಾ ಪ್ರಕ್ರಿಯೆಯನ್ನು ಸರಿಪಡಿಸುವ ವಿಧಿವಿಧಾನದ ಪರಿಶೀಲನೆಗಾಗಿ ಜಂಟಿ ಕಾರ್ಯಪಡೆಯೊಂದನ್ನು ರಚಿಸುವ ನಿರ್ಧಾರವನ್ನು ಅವು ಕೈಗೊಂಡಿವೆ. ವೈದ್ಯರು, ಹಿರಿಯ ನಾಗರಿಕರು, ಪತ್ರಕರ್ತರು ಹಾಗೂ ವ್ಯಾಪಾರಿಗಳಿಗಾಗಿ ಈ ವೀಸಾ ನಿಯಮ ಉದಾರೀಕರಣ ಪ್ರಸ್ತಾಪವನ್ನು ಇಡಲಾಗಿತ್ತು.
ಇದಲ್ಲದೆ, ಭಾರತವು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಭಾರತವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬಳಿಕ, ಹೊಸ ಮಾಹಿತಿಯನ್ನು ಸಂಬಂಧಿತ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಅವು ಒಪ್ಪಿವೆ.
ಮಾನವ ಕಳ್ಳಸಾಗಾಟ, ಸೈಬರ್ ಅಪರಾಧ ಇತ್ಯಾದಿಗಳ ತಾಂತ್ರಿಕ ವಿವರಗಳನ್ನು ಮುಂದುವರಿಸಲು ಎಫ್ಐಎ ಹಾಗೂ ಎನ್ಐಎಗಳು ಸಭೆಯೊಂದನ್ನು ನಡೆಸಬೇಕೆಂದು ನಿರ್ಧರಿಸಲಾಯಿತು. ಹೆಚ್ಚುತ್ತಿರುವ ಮಾದಕ ದ್ರವ್ಯ ಪಿಡುಗಿನ ಕುರಿತು ಕಳವಳ ಹಂಚಿಕೊಂಡ ಭಾರತ-ಪಾಕಿಸ್ತಾನಗಳು ಇದರ ಪರಿಣಾಮಕಾರಿ ನಿಯಂತ್ರಣಕ್ಕೆ ಭಾರತದ ಎನ್ಸಿಬಿ ಹಾಗೂ ಪಾಕಿಸ್ತಾನದ ಎಎನ್ಎಫ್ಗಳ ನಡುವೆ ಸಹಕಾರದ ಒಪ್ಪಂದವೇರ್ಪಡಿಸಿಕೊಂಡಿವೆ. ಉಭಯ ಸಂಸ್ಥೆಗಳ ಮಹಾ ನಿರ್ದೇಶಕರ ಸಭೆಯನ್ನು ಪ್ರತಿ ವರ್ಷ ನಡೆಸಬೇಕೆಂದು ಎರಡೂ ಪಕ್ಷಗಳು ಒಪ್ಪಿಕೊಂಡಿದ್ದು, ಎಎನ್ಎಫ್ನ ಮಹಾ ನಿರ್ದೇಶಕರೊಂದಿಗೆ ಮಾತುಕತೆಗಾಗಿ 2011ರ ಮೇಯಲ್ಲಿ ಪಾಕಿಸ್ತಾನಕ್ಕೆ ಎನ್ಸಿಬಿಯ ಮಹಾ ನಿರ್ದೇಶಕರು ಭೇಟಿ ನೀಡಬೇಕೆಂಬ ಪಾಕಿಸ್ತಾನದ ಆಹ್ವಾನವನ್ನು ಒಪ್ಪಿಕೊಳ್ಳಲಾಗಿದೆ.
ಇದಲ್ಲದೆ, ಭಾರತವು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದ ವಿಚಾರಣೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದೆ. ಭಾರತವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬಳಿಕ, ಹೊಸ ಮಾಹಿತಿಯನ್ನು ಸಂಬಂಧಿತ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಅವು ಒಪ್ಪಿವೆ.
ಮಾನವ ಕಳ್ಳಸಾಗಾಟ, ಸೈಬರ್ ಅಪರಾಧ ಇತ್ಯಾದಿಗಳ ತಾಂತ್ರಿಕ ವಿವರಗಳನ್ನು ಮುಂದುವರಿಸಲು ಎಫ್ಐಎ ಹಾಗೂ ಎನ್ಐಎಗಳು ಸಭೆಯೊಂದನ್ನು ನಡೆಸಬೇಕೆಂದು ನಿರ್ಧರಿಸಲಾಯಿತು. ಹೆಚ್ಚುತ್ತಿರುವ ಮಾದಕ ದ್ರವ್ಯ ಪಿಡುಗಿನ ಕುರಿತು ಕಳವಳ ಹಂಚಿಕೊಂಡ ಭಾರತ-ಪಾಕಿಸ್ತಾನಗಳು ಇದರ ಪರಿಣಾಮಕಾರಿ ನಿಯಂತ್ರಣಕ್ಕೆ ಭಾರತದ ಎನ್ಸಿಬಿ ಹಾಗೂ ಪಾಕಿಸ್ತಾನದ ಎಎನ್ಎಫ್ಗಳ ನಡುವೆ ಸಹಕಾರದ ಒಪ್ಪಂದವೇರ್ಪಡಿಸಿಕೊಂಡಿವೆ. ಉಭಯ ಸಂಸ್ಥೆಗಳ ಮಹಾ ನಿರ್ದೇಶಕರ ಸಭೆಯನ್ನು ಪ್ರತಿ ವರ್ಷ ನಡೆಸಬೇಕೆಂದು ಎರಡೂ ಪಕ್ಷಗಳು ಒಪ್ಪಿಕೊಂಡಿದ್ದು, ಎಎನ್ಎಫ್ನ ಮಹಾ ನಿರ್ದೇಶಕರೊಂದಿಗೆ ಮಾತುಕತೆಗಾಗಿ 2011ರ ಮೇಯಲ್ಲಿ ಪಾಕಿಸ್ತಾನಕ್ಕೆ ಎನ್ಸಿಬಿಯ ಮಹಾ ನಿರ್ದೇಶಕರು ಭೇಟಿ ನೀಡಬೇಕೆಂಬ ಪಾಕಿಸ್ತಾನದ ಆಹ್ವಾನವನ್ನು ಒಪ್ಪಿಕೊಳ್ಳಲಾಗಿದೆ.
ಶಿಕ್ಷಾವಧಿ ಪೂರೈಸಿದ, ರಾಷ್ಟ್ರೀಯತೆ ಖಚಿತಗೊಳಿಸಲ್ಪಟ್ಟ ಹಾಗೂ ಪ್ರಯಾಣ ದಾಖಲೆ ಪಡೆಯಲಾಗಿರುವ ಉಭಯ ದೇಶಗಳ ಕೈದಿಗಳು ಹಾಗೂ ಮೀನುಗಾರರನ್ನು ಎ.15ರೊಳಗೆ ಬಿಡುಗಡೆಗೊಳಿಸಲು ಉಭಯ ದೇಶಗಳೂ ಸಮ್ಮತಿಸಿವೆ. ಇತ್ಯರ್ಥವಾಗದೆ ಉಳಿದಿರುವ ಸಮಸ್ಯೆಗಳ ಕುರಿತು ಮಾತುಕತೆ ಜಾರಿಯಲ್ಲಿರಿಸುವುದು ಅಗತ್ಯವೆಂದು ಭಾರತ-ಪಾಕಿಸ್ತಾನಗಳು ಅಭಿಪ್ರಾಯಿಸಿದ್ದು, ಮುಂದೆ ಗೃಹ ಹಾಗೂ ಆಂತರಿಕ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ದ್ವೈವಾರ್ಷಿಕವಾಗಿ ನಡೆಸುವುದೆಂದು ನಿರ್ಧರಿಸಲಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ