ಶನಿವಾರ, ಮಾರ್ಚ್ 26, 2011

ರಾಜ್ಯ ಉಳಿಸಲು ಎಸ್‌ಡಿಪಿಐಯನ್ನು ಗೆಲ್ಲಿಸಿ ; ಹನ್ನಾನ್ ಕರೆ

ಚನ್ನಪಟ್ಟಣ,    ಮತದಾರರ ಭಾವನೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಿ, ರಾಜ್ಯ ಉಳಿಸಲು ಎಸ್‌ಡಿಪಿಐಯನ್ನು ಗೆಲ್ಲಿಸಿಯೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಕರೆ ನೀಡಿದ್ದಾರೆ.ಪಕ್ಷದ ಅಭ್ಯರ್ಥಿ ಉಪಚುಣಾವಣೆಗೆ ನಾಮಪತ್ರ ಸಲ್ಲಿಸಿದ ನಂತರ, ಕಾರ್ಯಕರ್ತರ ಸಭೆಯನ್ನುದ್ದೆೇಶಿಸಿ ಮಾತಾನಾಡಿದ ಅವರು, ಪ್ರಜಾಪ್ರಭುತ್ವವನ್ನು ಕಾಪಾಡಲು ಎಸ್ಡಿಪಿಐ ಸ್ಪರ್ಧಿಸುತ್ತಿದೆ ಎಂದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮತದಾರರ ನಂಬಿಕೆಯೊಂದಿಗೆ ಚಲ್ಲಾಟವಾಡುತ್ತಿವೆ. ಪ್ರಜಾಪ್ರಭುತ್ವವನ್ನು ಅವಮಾನ ಮಾಡುತ್ತಿವೆ. ಇದರಿಂದಾಗಿ ಈ ಕ್ಷೇತ್ರದ ಜನ ಎರಡು ಮೂರು ಚುನಾವಣೆಯನ್ನು ನೋಡುವಂತಾಗಿದೆೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ