ಮಂಗಳವಾರ, ಮಾರ್ಚ್ 08, 2011

ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನಿಂದ ಸಾರ್ವಜನಿಕ ಸಭೆ

ಸಾಮಾಜಿಕ ಬದಲಾವಣೆಯಲ್ಲಿ ಪ್ರವಾದಿ (ಸ.ಅ)ರ ಮಾದರಿಯ ಕುರಿತು ಪ್ರಭಾಷಣ ಹಾಗೂ ಸಾರ್ವಜನಿಕ ಸಭೆ ಇತ್ತೀಚೆಗೆ ಈಶ್ವರಮಂಗಲ ಜಂಕ್ಷನ್‌ನಲ್ಲಿ ನಡೆಯಿತು. ಅಬ್ದುಲ್ಲ ಮದನಿಯವರ ದುಆ ದೊಂದಿಗೆ ಆರಂಭಗೊಂಡ ಕಾರ್ಯ ಕ್ರಮವನ್ನು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೆ.ಅಬ್ದುಲ್ಲತೀಫ್ ಉದ್ಘಾಟಿಸಿದರು. ಮುಖ್ಯ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಮ್.ಶರೀಫ್ ಪ್ರವಾದಿ (ಸ.ಅ)ರವರು ತೌಹೀದ್ ಬೋಧಕ ರಾಗಿ ಪ್ರತೀ ರಂಗಗಳಲ್ಲೂ ಮಾನವ ಸಮುದಾಯಕ್ಕೆ ಮಾದರಿ ಪುರುಷನೆಸಿ ದರು. ಪ್ರಸಕ್ತ ಸನ್ನಿವೇಶದಲ್ಲೂ ಅವರ ಮಾದರಿ ಜೀವನ ನಾವು ಅಳವಡಿಸುವ ವರೆಗೆ ಅವರ ಪ್ರೀತಿ ಸಂಪಾದಿಸಲು ಸಾಧ್ಯವಿಲ್ಲ. ಪ್ರವಾದಿ ಸ್ನೇಹ ಒಂದು ಸಿದ್ಧಾಂತವಾಗಿದೆ ಎಂದು ನುಡಿದರು.

ಅಧ್ಯಕ್ಷ ಭಾಷಣ ಮಾಡಿದ ಅಬ್ದುಲ್ಲ ಮದನಿಯವರು ಮಾತನಾಡುತ್ತಾ ಉಲಮ ಮತ್ತು ಉಮಾರಗಳ ಐಕ್ಯತೆ ಕಾಲದ ಬೇಡಿಕೆಯಾಗಿದೆ. ಉಮಾರ ಗಳು ಕೇವಲ ಮಸ್ಜಿದ್ ಹಾಗೂ ಮಿಂಬರ್‌ಗಳ ನಡುವಿನ ಸ್ಥಳಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂದರು. ಕಾರ್ಯಕ್ರಮದ ಮೊದಲು ಕಾರ್ಜಲ್ ತಂಡದವರಿಂದ ಆಕರ್ಷಕ ದಫ್ ಕಾರ್ಯಕ್ರಮ ನಡೆಯಿತು. ವೇದಿಕೆ ಯಲ್ಲಿ ಅಲ್ ಇಂಡಿಯಾ ಕೌನ್ಸಿಲ್‌ನ ಪುತ್ತೂರು ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಮುಸ್ತಾಫ ಲತೀಫಿ, ಪಿಎಫ್‌ಐಯ ಕುಂಬ್ರ ವಲಯ ಕಾರ್ಯದರ್ಶಿ ರಫೀಕ್ ಎಮ್.ಎಸ್., ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಸಮಿತಿಯ ಸದಸ್ಯ ಪಿ.ಯಂ.ಮೂಸೆ ಕುಂಞಿ ಅರಿಯಡ್ಕ ಉಪಸ್ಥಿತರಿದ್ದರು.ಜಮಾಲುದ್ದೀನ್ ಸ್ವಾಗತಿಸಿ, ರಶೀದ್ ವಂದಿಸಿದರು. ಉಸ್ಮಾನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ