ಶುಕ್ರವಾರ, ಫೆಬ್ರವರಿ 18, 2011

'ಬದಲಾವಣೆ ಬಯಸುವವರಿಗೆ ಈಜಿಪ್ಟ್‌ನಿಂದ ಪಾಠ'

ಮೈಸೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೈಸೂರು ಜಿಲ್ಲಾ ವತಿಯಿಂದ 'ಈಜಿಪ್ಟ್ ಜನರಿಗೆ ವಂದನಾರ್ಪಣೆ' ಕಾರ್ಯಕ್ರಮವು ಇತ್ತೀಚೆಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಅತಾವುಲ್ಲಾ, ಪ್ರಜಾಪ್ರಭುತ್ವಕ್ಕಾಗಿ ಈಜಿಪ್ಟ್ ಜನತೆಯ ಹೋರಾಟವನ್ನು ಸಂಘಟನೆ ಶ್ಲಾಘಿಸುತ್ತದೆ ಎಂದರು.
ಮೌಲಾನಾ ಅಬ್ದುಲ್ ರಹ್ಮಾನ್ ಮಾತನಾಡಿ, ನಿರಂಕುಶ ಪ್ರಭುತ್ವವು ಯಾವುದೇ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದರು.
ಬದಲಾವಣೆಯನ್ನು ಬಯಸುವ ಜನರಿಗೆ ನಾಗರಿಕತೆಯ ಮಾತೆ ಎಂದು ಕರೆಯಲ್ಪಡುವ ಈಜಿಪ್ಟ್‌ನಿಂದ ಉತ್ತಮ ಪಾಠವಿದೆ ಎಂದು ಅಬ್ದುಲ್ ಅಝೀಝ್ ಎಂ.ಕೆ. ನುಡಿದರು.
ನದೀಂ ನಿರೂಪಿಸಿ, ಇಮ್ರಾನ್ ಸ್ವಾಗತಿಸಿದರು.

Mysore program

Mysore program

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ