ಬುಧವಾರ, ಜನವರಿ 05, 2011

ಕಾಂಗ್ರೆಸ್ ಸೋಲಿಗೆ ಎಸ್.ಡಿ.ಪಿ.ಐ ಕಾರಣ ..ಹಲವೆಡೆ ಮೂರನೆ ಸ್ಥಾನದಲ್ಲಿ ಎಸ್.ಡಿ.ಪಿ.ಐ . ನೆಲಕಚ್ಚಿದ ಜೆಡಿಎಸ್

      ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಸೋಲಲು ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕಾರಣ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಲವು ಕಡೆ ಕಾಂಗ್ರೆಸ್ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಿದ್ದರೂ ಕೆಲವು ಮತಗಳ ಅಂತರದಿಂದ ಸೋತಿದೆ. ಇಂತಹ ಕ್ಷೇತ್ರಗಳಲ್ಲಿ ಎಸ್.ಡಿ.ಪಿ.ಐ ಗೆಲುವಿನ ಅಂತರಕ್ಕಿಂತ ಹಲವು ಪಟ್ಟು ಹೆಚ್ಚಿನ ಮತ ಪಡೆದಿದೆ. ಇದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂಬುವುದು ಅವಳಿ ಜಿಲ್ಲೆಗಳ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯ. ಒಂದು ರೀತಿಯಲ್ಲಿ ಎಸ್.ಡಿ.ಪಿ.ಐ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ತನಗೆ ಗೆಲ್ಲಲು ಸಾಧ್ಯವಾಗದಿದ್ದರೂ ಪ್ರಬಲ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವ ಸಾಮರ್ಥ್ಯ ಇದೆ ಎಂಬುವುದನ್ನು ನಿರೂಪಿಸಿದೆ.
ಬಿ.ಜೆ.ಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು :
ಇತ್ತ ಕಾಂಗ್ರೆಸ್ ಸೋಲಿಗೆ ಎಸ್.ಡಿ.ಪಿ.ಐ ಕಾರಣ ಎಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಅತ್ತ ಎಸ್.ಡಿ.ಪಿ.ಐ ಕಾರ್ಯಕರ್ತರು ತಮ್ಮ ಮೊದಲ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಮತಗಳಿಕೆಯನ್ನು ನೋಡಿ ಉಭಯ ಜಿಲ್ಲೆಗಳಲ್ಲಿ ಪಕ್ಷ ಜನರ ನಡುವೆ ಜನಪ್ರಿಯವಾಗಿ ಬೆಳೆಯುತ್ತಿರುವುದನ್ನು ಮನಗಂಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗೆದ್ದರೂ ಒಂದೇ . ಅವೆರಡರಲ್ಲೂ ಯಾವುದೇ ವ್ಯತಾಸವಿಲ್ಲ , ಕಾಂಗ್ರೆಸ್ ಕೇವಲ ಇದುವರೆಗೆ ಅಲ್ಪಸಂಖ್ಯಾತರ ಮತಗಳಿಕೆಗಾಗಿ ಅವರನ್ನು ಬಳಸಿಕೊಂಡಿದೆಯೇ  ಹೊರತು ಅವರ ಅಭಿವೃದ್ಧಿ ಮತ್ತು ರಕ್ಷಣೆಗೆ ಶ್ರಮಿಸಿಲ್ಲ. ಇದರಿಂದ ಸಹಜವಾಗಿ ಅಲ್ಪಸಂಖ್ಯಾತರು ಬಿಜೆಪಿಯ ಜೊತೆಗೆ ಕಾಂಗ್ರೆಸ್ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಸೋಲಿನ ಬಗ್ಗೆ ಅಲ್ಪಸಂಖ್ಯಾತರು ಯಾವುದೇ ರೀತಿಯಲ್ಲಿ ಚಿಂತಿತರಾಗಿಲ್ಲ ಎಂಬುವುದು ಎಸ್.ಡಿ.ಪಿ.ಐ ಕಾರ್ಯಕರ್ತರ ಅಭಿಪ್ರಾಯ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ