ಸೋಮವಾರ, ಜನವರಿ 10, 2011

ನಾಯಿ­ಗಿ­ರುವ ನಿಷ್ಠೆಯೂ ಶಾಸ­ಕ­ರಿ­ಗಿಲ್ಲ: ಸಿಂಧ್ಯಾ ವಿಷಾದ

ಶಿವ­ಮೊಗ್ಗ: ನಾಯಿ­ಗಿ­ರುವ ನಿಷ್ಠೆಯೂ ರಾಜ­ಕಾ­ರ­ಣಿ­ಗ­ಳಿಗೆ ಇಲ್ಲ­ವಾ­ಗಿದೆ ಎಂದು ಮಾಜಿ ಸಚಿವ ಹಾಗೂ ಜೆಡಿ­ಎಸ್‌ ಕಾರ್ಯಾ­ಧ್ಯಕ್ಷ ಪಿ.ಜಿ.ಆರ್‌. ಸಿಂಧ್ಯಾ ವಿಷಾದ ವ್ಯಕ್ತ­ಪ­ಡಿ­ಸಿ­ದರು.

ಶಿವ­ಮೊ­ಗ್ಗ­ದಲ್ಲಿ ಬುಧ­ವಾರ ಆಯೋ­ಜಿ­ಸ­ಲಾ­ಗಿದ್ದ ಅಪೆ­ಕ್ಸ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ದಿ.ಕೋ­ಟೋ­ಜಿ­ರಾವ್‌ ರಾವ್‌ ಶ್ರದಾ­œಂ­ಜಲಿ ಕಾರ್ಯ­ಕ್ರ­ಮ­ದಲ್ಲಿ ಭಾಗ­ವ­ಹಿಸಿ ಸಿಂಧ್ಯಾ ಮಾತ­ನಾ­ಡು­ತ್ತಿದ್ದ ರು. ಇತ್ತೀಚಿನ ದಿನ­ಗ­ಳಲ್ಲಿ ರಾಜ­ಕೀಯ ಕೀಳು­ಮ­ಟ್ಟಕ್ಕೆ ಇಳಿ­ಯುತ್ತಿದೆ.

ಸಾರ್ವ­ಜ­ನಿಕ ಜೀವ­ನ­ದಲ್ಲಿ ಭ್ರಷ್ಟಾ­ಚಾರ ಅವ್ಯಾ­ಹ­ತ­ವಾ­ಗಿದೆ. ಸಾಮಾ­ಜಿಕ ಮೌಲ್ಯ­ಗಳು ನಶಿ­ಸು­ತ್ತಿವೆ. ಆದ್ದರಿಂದ ಯುವ­ಕರು ಪ್ರಾಮಾ­ಣಿ­ಕ­ತೆ ಮೈಗೂ­ಡಿ­ಸಿ­ಕೊಂಡು ವ್ಯವ­ಸ್ಥೆಯ ಶುದಿ­œà­ಕ­ರ­ಣಕ್ಕೆ ಮುಂದಾ­ಗ­ಬೇ­ಕಿದೆ ಎಂದರು.

ದಿವಂ­ಗತ ಕೋಟೋ­ಜಿ­ರಾ­ವ್‌­ರ­ವರು ಸಹ­ಕಾರಿ ಕ್ಷೇತ್ರದ ಸರ್ವ­ತೋ­ಮುಖ ಅಭಿ­ವೃ­ದಿ­œಗೆ ಶ್ರಮಿ­ಸಿ­ದ್ದರು. ರಾಜ­ಕೀಯ ಪಕ್ಷ­ವೊಂ­ದ­ರಲ್ಲಿ ಅವರು ಸಕ್ರಿ­ಯ­ವಾ­ಗಿ­ದ್ದರೂ, ಸಹ­ಕಾರಿ ರಂಗ­ದಲ್ಲಿ ಎಂದಿಗೂ ಅವರು ರಾಜ­ಕೀಯ ಮಾಡ­ಲಿಲ್ಲ. ಆದರೆ ಸಹ­ಕಾರಿ ರಂಗ­ದಲ್ಲಿ ಇಂದು ಅಪ್ರಾ­ಮಾ­ಣಿ­ಕತೆ ಹಾಗೂ ರಾಜ­ಕೀಯ ಮನೆ ಮಾಡಿ­ರು­ವುದು ಸಹ­ಕಾರಿ ರಂಗದ ಬೆಳ­ವ­ಣಿ­ಗೆಗೆ ಮಾರ­ಕ­ವಾ­ಗ­ಲಿದೆ ಆತಂಕ ವ್ಯಕ್ತ­ಪ­ಡಿ­ಸಿ­ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ