ಶುಕ್ರವಾರ, ಮಾರ್ಚ್ 04, 2011

ಗ್ಯಾರೇಜೊಂದಕ್ಕೆ ನುಗ್ಗಿ ದಾಂಧಲೆ:ಇಬ್ಬರು ಬಜರಂಗಿಗಳ ಸೆರೆ

ಮಂಗಳೂರು: ಕೆಲಸದಿಂದ ತೆಗೆದುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ಯಾರೇಜೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದ ಬಜರಂಗದಳದ ಇಬ್ಬರು ಆರೋಪಿಗಳನ್ನು ನಿನ್ನೆ ಉರ್ವ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಬೆಳ್ತಂಗಡಿಯ ಸುನಿಲ್ ಸಾಲ್ಯಾನ್ ಮತ್ತು ಅನಿಲ್ ಎಂಬವರೇ ಬಂಧಿತ ಬಜರಂಗದಳದ ಕಾರ್ಯಕರ್ತರು. ಸುನಿಲ್ ಹಿಂದೆ ಕೊಟ್ಟಾರ ಚೌಕಿಯಲ್ಲಿ ರುವ ರಾಕೇಶ್ ಡಿಸೋಜಾ ಎಂಬವರ ಮಾಲಕತ್ವದ ಆರ್.ಎನ್. ಗ್ಯಾರೇಜಿನಲ್ಲಿ ಕೆಲಸಕ್ಕಿದ್ದ. ಕೆಲವು ತಿಂಗಳುಗಳ ಹಿಂದೆ ಆತ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಮತ್ತು ಕಳ್ಳತನವನ್ನೂ ಮಾಡುತ್ತಿದ್ದಾನೆ ಎಂಬ ಆರೋಪದಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ಆಕ್ರೋಶದಲ್ಲಿದ್ದ ಸುನಿಲ್ ಕಳೆದ ಗುರುವಾರದಂದು ಅನಿಲ್, ಮತ್ತಿತರರ ಜೊತೆ ಗ್ಯಾರೇಜಿಗೆ ನುಗ್ಗಿ ದಾಂಧಲೆ ನಡೆಸಿ ನೆಲ್ಸನ್ ಮತ್ತು ರಾಕೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಪ್ರಕರಣವನ್ನು ದಾಖಲಿಸಿದ್ದ ಉರ್ವ ಪೊಲೀಸರು ನಿನ್ನೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ