ಶನಿವಾರ, ಫೆಬ್ರವರಿ 19, 2011

ಪಾಪ್ಯುಲರ್ ಫ್ರಂಟ್ ವತಿಯಿಂದ ಈಜಿಪ್ಟ್ ಜನತೆಗೆ ಅಭಿನಂದನೆ

demonstrationಮಂಗಳೂರು: ಸರ್ವಾಧಿಕಾರಿ ಹುಸ್ನಿ ಮುಬಾರಕ್‌ನನ್ನು ಉಚ್ಛಾಟಿಸುವಲ್ಲಿ ಯಶಸ್ವಿಯಾದ ಈಜಿಪ್ಟಿಯನ್ ಜನತೆಯ ಹೋರಾಟವು ನಮ್ಮ ದೇಶದ ಸ್ವಾರ್ಥ ರಾಜಕಾರಣಿಗಳಿಗೆ ಪಾಠವಾಗಲಿ ಎಂದು ನಝೀರ್ ಬೋಳಂಗಡಿ ನುಡಿದರು. ಅವರು ಪಾಪ್ಯುಲರ್ ಫ್ರಂಟ್ ಮಂಗಳೂರಿನ ಜಿಲ್ಲಾ ಕಚೇರಿಯ ಮುಂದೆ ಆಯೋಜಿಸಿದ 'ಈಜಿಪ್ಟ್ ಜನತೆಗೆ ಅಭಿನಂದನಾ ಕಾರ್ಯಕ್ರಮ'ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯುವ ಬರಹಗಾರ ಇಸ್ಮತ್ ಫಜೀರ್, ಹಾಜಿ ಬಿ.ಎಸ್.ಹುಸೈನ್ ಜೋಕಟ್ಟೆ, ನವಾಝ್ ಉಳ್ಳಾಲ್, ಅತಾವುಲ್ಲಾ ಜೋಕಟ್ಟೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ