ಶುಕ್ರವಾರ, ಜನವರಿ 28, 2011

ಜೋಕಟ್ಟೆಯಲ್ಲಿಂದು ‘ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸೀದಿ

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಡಿಸೆಂಬರ್ ೬ರಿಂದ ಜನವರಿ ೩೦ರವರೆಗೆ ಆಯೋಜಿಸಿರುವ ‘ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸೀದಿ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಬಜ್ಪೆ ವಲಯ ವ್ಯಾಪ್ತಿಯ ಜೋಕಟ್ಟೆ ಏರಿಯಾ ವತಿಯಿಂದ ‘ಗಾಂಧೀಜಿ ಹತ್ಯೆಯಿಂದ ಬಾಬರಿ ಮಸೀದಿ ಧ್ವಂಸ ದವರೆಗೆ ಎಂಬ ಜನಜಾಗೃತಿ ಕಾರ‍್ಯಕ್ರಮವು ಇಂದು(ಜ.೨೮) ರಾತ್ರಿ ಏಳು ಗಂಟೆಗೆ ಜೋಕಟ್ಟೆಯ ಕೆಬಿಎಸ್ ಜಂಕ್ಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ‍್ಯಕ್ರಮದಲ್ಲಿ ಕ್ರಿಯೆಟಿವ್ ಫೌಂಡೇಶನ್ ಚೇರ್‌ಮೆನ್ ಅನ್ವರ್ ಸಾದಾತ್ ಮತ್ತು ಅಂಕಣಕಾರರು ಹಾಗೂ ಚಿಂತಕ ಆಗಿರುವ ಶಶಿಧರ್ ಜೋಕಟ್ಟೆ ವಿಚಾರ ಮಂಡಿಸಲಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿ ಸದಸ್ಯ ಶರೀಫ್ ಬಜ್ಪೆ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಸ್ಲಿಂ ಸರಕಾರಿ ನಿವೃತ್ತ ಅಧಿಕಾರಿಗಳ ಒಕ್ಕೂಟದ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಹಾಜಿ ಬಿ.ಎಸ್. ಹುಸೈನ್ ಮತ್ತು ೬೨ನೇ ತೋಕುರು ಗ್ರಾ. ಪಂ. ಉಪಾಧ್ಯಕ್ಷ ಶೇಕುಂಞಿ ಭಾಗವಹಿಸಲಿದ್ದಾರೆ ಎಂದು ಪಿಎಫ್‌ಐ ಜೋಕಟ್ಟೆ ಏರಿಯಾದ ಅಧ್ಯಕ್ಷ ಜಮಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ