ಗುರುವಾರ, ಜನವರಿ 13, 2011

ಕೊಣಾಜೆ ಠಾಣೆಯ ಎಸ್ಸೈ ಸುನೀಲ್ ಪಾಟೀಲ್ ದಕ್ಷ ಪ್ರಾಮಾಣಿಕ ಸೇವೆಯ ಅಧಿಕಾರಿ

ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಸಾಮಾಜಿಕ ಸೇವಾ ಮನೋಭಾವನೆಯೊಂದಿಗೆ, ಬಡವರಿಗೆ ಕಾನೂನಿನ ನೆರವು ಮತ್ತು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ವನ್ನು ನೀಡುತ್ತಾ ಬಂದಿರುವ ಸುನಿಲ್ ಪಾಟೀಲ್ ನಾಗರಿಕರು ಹಾಗೂ ಪೊಲೀಸ್ ಠಾಣೆಯ ನಡುವೆ ಮುಕ್ತ ವಾತಾವರಣವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇವರು ಯಾವುದೇ ಅಪರಾಧ ಕೆಲಸಗಳಿಗೆ ಬೆಂಬಲ ನೀಡದಿರುವುದು ಹಾಗೂ ಲಂಚಕ್ಕೆ ಕೈಯೊಡ್ಡದಿರುವ ಒಂದೇ ಕಾರಣಕ್ಕೆ ಇದೀಗ ಅವರನ್ನು ವರ್ಗಾ ಯಿಸಲು ಪ್ರಯತ್ನಿಸುತ್ತಿರುವುದು ಕೊಣಾಜೆ ಠಾಣಾ ವ್ಯಾಪ್ತಿಯ ನಾಗರಿಕರನ್ನು ಆಕ್ರೋಷಿತರನ್ನಾಗಿಸಿದ್ದು ಎಸ್ಸೈ ವರ್ಗಾವಣೆ ವಿರುದ್ದ ಪ್ರತಿಭಟನೆ ನಡೆಸುವ ಸಿದ್ಧತೆಯಲ್ಲಿದ್ದಾರೆ.
ಕೊಣಾಜೆ ಠಾಣೆಯ ಎಸ್ಸೈ ಸುನೀಲ್ ಪಾಟೀಲ್ ದಕ್ಷ, ಪ್ರಾಮಾಣಿಕ ಸೇವೆ ಬಗ್ಗೆ ಮರಳು ದಂಧೆಯವರನ್ನು ಬಿಟ್ಟು ಉಳಿದ ಎಲ್ಲಾ ನಾಗರಿ ಕರಿಗೂ ಇವರು ಬೇಕಾದವರೇ ಆಗಿದ್ದಾರೆ. ಆದರೆ ಕೆಲವೊಂದು ಹಿತಾಸಕ್ತಿಗಳು ರಾಜಕೀಯ ಪ್ರಭಾವದಿಂದ ನಡೆಸುವ ಪ್ರಯತ್ನಗಳು ಜಿಲ್ಲೆಯ ದಕ್ಷ ಅಧಿಕಾರಿಗಳಿಗೆ ನೆಲೆ ಇಲ್ಲದಂತೆ ಮಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ