ಕೇಸರಿ ಭಯೋತ್ಪಾದನೆಯ ವಿರುದ್ಧದ ತಾರ್ಕಿಕ ಹೋರಾಟಕ್ಕೆ ಜಾತ್ಯತೀತ, ಎಡಪಂಥೀಯ ಹಾಗೂ ಪ್ರಗತಿಪರ ಶಕ್ತಿಗಳು ಪ್ರಬಲ ಜನಚಳವಳಿ ಕಟ್ಟುವ ಅಗತ್ಯವಿದೆ ಎಂದು ದೆಹಲಿಯ ಚಿಂತಕ ಸುಭಾಷ್ ಗಟಾಡೆ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕೋಮುಸೌಹಾರ್ದ ವೇದಿಕೆ ಬೆಂಗಳೂರಿನ ಐಎಸ್ಐ ಸಭಾಂಗಣದಲ್ಲಿ ‘ಕೋಮುವಾದ, ಭಯೋತ್ಪಾದನೆ ಹಾಗೂ ಪ್ರಜಾಪ್ರಭುತ್ವ: ಆತಂಕಕಾರಿ ಹೊಸ ವಿದ್ಯಾಮಾನಗಳು’ ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೆಹಲಿಯ ಚಿಂತಕ ಸುಭಾಷ್ ಗಟಾಡೆ, ಲೇಖಕ ಹಾಗೂ ‘ವಾರ್ತಾಭಾರತಿ’ಯ ಅಂಕಣಕಾರ ಶಿವಸುಂದರ್, ಪಿಯುಸಿಎಲ್ನ ಡಾ.ರಾಮದಾಸ್ ರಾವ್, ಲೇಖಕ ಎಚ್.ಎಲ್.ಕೇಶವಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ ಕೋಮುಸೌಹಾರ್ದ ವೇದಿಕೆ ನಗರದ ಐಎಸ್ಐ ಸಭಾಂಗಣದಲ್ಲಿ ‘ಕೋಮುವಾದ, ಭಯೋತ್ಪಾದನೆ ಹಾಗೂ ಪ್ರಜಾಪ್ರಭುತ್ವ: ಆತಂಕಕಾರಿ ಹೊಸ ವಿದ್ಯಮಾನಗಳು’ ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಿಂದುತ್ವದ ಹೆಸರಲ್ಲಿ ನಡೆಯುತ್ತಿ ರುವ ಭಯೋತ್ಪಾದನೆಯ ವಿವಿಧ ಆಯಾಮಗಳು’ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕೇಸರಿ ಭಯೋತ್ಪಾದನೆ ಇತ್ತೀಚಿನ ದಿನಗಳಲ್ಲಿ ಹೊರಜಗತ್ತಿಗೆ ಅನಾವರಣ ಗೊಳ್ಳುತ್ತಿರಬಹುದು ಆದರೆ, ಹಿಂದುತ್ವ ಅಥವಾ ಸಂಘಪರಿವಾರದ ಭಯೋತ್ಪಾ ದಕ ಚಟುವಟಿಕೆಗಳಿಗೆ ದೇಶದಲ್ಲಿ ಸುದೀರ್ಘ ಇತಿಹಾಸವಿದ್ದು, ಜಾಗತಿಕ ಮಟ್ಟದಲ್ಲಿ ಇದರ ಜಾಲ ಹಬ್ಬಿಕೊಂಡಿದೆ. ಸ್ವಾತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆ ಆಗಿದ್ದರೆ, ಶ್ರೀಕಾಂತ್ ಪುರೋಹಿತ್ ಹಾಗೂ ಸ್ವಾಮಿ ಅಸೀಮಾ ನಂದ ಅದರ ಈಗಿನ ಮುಂದುವರಿಕೆ ಆಗಿದ್ದಾರೆ ಎಂದು ಗಟಾಡೆ ವಿವರಿಸಿದರು.
ಕೇಸರಿ ಭಯೋತ್ಪಾದನೆಯ ಬಗ್ಗೆ ಅಸಂಖ್ಯ ಸಾಕ್ಷಿಗಳು ಲಭ್ಯವಿದ್ದರೂ, ತನಿಖೆಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಿ ರುವುದು ಮತ್ತು ಈ ಬಗ್ಗೆ ಪ್ರಭುತ್ವ ಹಾಗೂ ಮಾಧ್ಯಮಗಳ ವೌನದ ಒಳ ಸಂಚು ನಮ್ಮ ಚರ್ಚೆಯ ವಿಷಯವಾಗ ಬೇಕಾಗಿದೆ.
ಹಿಂದುತ್ವ ಭಯೋತ್ಪಾದನೆ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಿದ್ದರೂ, ಇದರ ವಿರುದ್ಧದ ಹೋರಾಟದಲ್ಲಿ ನಾವು ಹೆಚ್ಚು ಮುಂದೆ ಹೋಗಿಲ್ಲ. ಪ್ರಭುತ್ವದ ಮೇಲೆ ಒತ್ತಡ ಹೇರಲು ನಮ್ಮಿಂದ ಸಾಧ್ಯವಾಗಿಲ್ಲ. ಮಾಲೆಗಾಂವ್ ಮತ್ತು ನಾಂದೇಡ್ ಘಟನೆಗಳ ನಂತರ ನಮ್ಮಿಂದ ಒಂದು ಜನ ಹೋರಾಟ ರೂಪಿಸುವಲ್ಲಿ ನಾವು ಸೋತಿದ್ದೇವೆ.
ಈ ಸಂದರ್ಭದಲ್ಲಿ ಪ್ರಗತಿಪರರು ನಮ್ಮ ಶಕ್ತಿ ಮತ್ತು ಹೋರಾಟದ ಸ್ವರೂಪವನ್ನು ಮರುವಿಮರ್ಶಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ದೇಶದ ಕಾರ್ಯಾಂಗ ಆಳವಾದ ಕೋಮುವಾದೀಕರಣಗೊಂಡಿದ್ದರೂ, ಕೇಸರಿ ಭಯೋತ್ಪಾದಕರ ವಿರುದ್ಧ ತನಿಖಾ ಸಂಸ್ಥೆಗಳ ಬಲೆ ಬಿಗಿಯಾಗುತ್ತಿ ರುವುದರಿಂದ ಸಂಘಪರಿವಾರದ ನಾಯಕರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಹಾಗೂ ಹತಾಶೆ ಕಾಡುತ್ತಿದೆ.
ಇದರ ಪರಿಣಾಮವೇ ಸಂಘಿಗಳ ದ್ವಂದ್ವ ಹೇಳಿಕೆಗಳು. ಆರೆಸ್ಸೆಸ್ ಪ್ರಮುಖ ಸುರೇಶ್ ಜೋಷಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು, ಕೆಲವು ಹಿಂದುತ್ವ ಉಗ್ರವಾದಿಗಳು ನಡೆಸಿದ ದುಷ್ಕೃತ್ಯಗಳಿಗೆ ನಮ್ಮನ್ನು ಜೋಡಿಸುತ್ತಿರುವುದು ಸರಿಯಲ್ಲ.
ಸಂಘಪರಿವಾರಕ್ಕೂ, ಉಗ್ರರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಮಾಲೇಗಾಂವ್ ಹಾಗೂ ನಾಂದೇಡ್ನ ಆರೋಪಿಗಳನ್ನು ನಾಸಿಕ್ ಮತ್ತು ಪುಣೆ ನ್ಯಾಯಾಲಯಕ್ಕೆ ಕರೆ ತಂದಾಗ ಅವರ ಮೇಲೆ ಹೂವಿನ ಮಳೆಗೈದವರು ಯಾರು ಎಂದು ಸುಭಾಷ್ ಗಟಾಡೆ ಪ್ರಶ್ನಿಸಿದರು.
ಅಸೀಮಾನಂದ ತಪ್ಪೊಪ್ಪಿಗೆ ನಂತರವೂ, ಸಾವಿರಾರು ಅಮಾಯಕ ಮುಸ್ಲಿಂ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಈ ಹಂತದಲ್ಲೂ ತನಿಖೆ ಮುಂದುವರಿದಿದೆ ಎಂದು ಸಿಬಿಐ ಹೇಳಿಕೆ ಸಲ್ಲಿಸುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನತೆ ಎಂದಿರುವಾಗ ಮತ್ಯಾಕೆ ಕಾನೂನು ತಾರತಮ್ಯ? ಹಿಂದುತ್ವ ಭಯೋತ್ಪಾದಕ ಕೃತ್ಯಗಳ ರೂವಾರಿಗಳ ಹತ್ತಿರ ಸುಳಿಯದ ನಮ್ಮ ವಿಚಾರಣಾ ಸಂಸ್ಥೆಗಳು ವಿಚಾರಣೆಗೊಳ ಪಡಿಸುವುದು ಯಾರನ್ನು ಎಂದು ಪ್ರಶ್ನಿಸಿದರು.
ಭಾವನೆಗಳ ಭಯೋತ್ಪಾದನೆಯಿಂದ ಬಾಂಬ್ ಭಯೋತ್ಪಾದನೆಗೆ ರೂಪಾಂತರಗೊಳ್ಳುತ್ತಿರುವ ಹಿಂದುತ್ವ ಉಗ್ರವಾದ ಈ ಎಲ್ಲ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಹಿಂದುತ್ವ ಭಯೋತ್ಪಾದನೆಯನ್ನು ಹತ್ತಿಕ್ಕಲು ದೃಷ್ಕೃತ್ಯಗಳ ಹಿಂದಿನ ಉಗ್ರ ರೂವಾರಿಗಳ ಬಂಧನವಾಗಬೇಕು. ಪ್ರಕರಣಗಳನ್ನು ದುರ್ಬಲಗೊಳಿಸಲು ವಿವಿಧ ಸಂಸ್ಥೆಗಳಿಂದ ತನಿಖೆ ನಡೆಸಲಾಗುತ್ತಿದ್ದು, ಇದನ್ನು ಒಂದೇ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಒತ್ತಡ ತರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಬಲ ಜನವರ್ಗವನ್ನು ಕಟ್ಟಬೇಕು ಎಂದು ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಇತರ ದೇಶಗಳ ಜನಚಳವಳಿಗಳು ನಮಗೆ ಮಾದರಿಯಾಗಬೇಕು ಎಂದು ಹೇಳಿದರು.ಹಿಂದೂಕರಣಗೊಂಡ ಪ್ರಭುತ್ವ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಹಾಗೂ ‘ವಾರ್ತಾಭಾರತಿ’ಯ ಅಂಕಣ ಕಾರ ಶಿವಸುಂದರ್ ಮಾತನಾಡಿ, ಪ್ರಭುತ್ವದ ಸರ್ವ ಅಂಗಗಳು ಹಿಂದೂಕರಣಗೊಂಡಿವೆ.
ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಷ್ಟರ ಮಟ್ಟಿಗೆ ಕೋಮುವಾದಿಕರಣಗೊಂಡಿದೆ ಎನ್ನುವುದಕ್ಕೆ ಗುಪ್ತಚರ ಇಲಾಖೆಯ ಹುದ್ದೆಗಳಿಗೆ ಮುಸ್ಲಿಮರು ಅರ್ಜಿ ಸಲ್ಲಿಸಬಾರದು ಎಂಬ ಅಲಿಖಿತ ನಿಯಮ ಹಾಗೂ ಕ್ರೈಸ್ತಪಾದ್ರಿಯನ್ನು ಜೀವಂತ ಸುಟ್ಟ ಧಾರಸಿಂಗ್ನ ಬಗ್ಗೆ ‘ಕೊಲೆ ಆತನ ಉದ್ದೇಶ ಆಗಿರಲಿಲ್ಲ; ಇದು ಆವೇಷದ ಸಂಗತಿ ಎಂದು ನ್ಯಾಯಾಧೀಶರು ಹೇಳಿದ್ದು ಸಾಕ್ಷಿ ಎಂದು ಅವರು ವಿಷಾದಿಸಿದರು.
ಈ ಸ್ಥಿತಿಗೆ ಮೂಲ ಕಾರಣ ಮಧ್ಯಮ ವರ್ಗದ ಕೋಮುವಾದೀಕರಣ. ದೇಶ ದೊಳಗೆ ವಿಭಜನೆ ಸೃಷ್ಟಿಸುವ ಅಪಾಯಕಾರಿ ಸಾಮಾಜಿಕ ಧ್ರುವೀಕರಣ. ಮಧ್ಯಮ ವರ್ಗದ ಲಾಲಚಿತನ. ಜೀವ ನದ ಬರ್ಬರತೆಯ ವಿಷಯಗಳನ್ನು ಮರೆಮಾಚಿ ಭ್ರಾಮಕ ಅಭಿವೃದ್ಧಿಯ ಕಲ್ಪನೆ ಮುಂದಿಡುವುದು.
ಪ್ರಜಾತಾಂತ್ರಿಕ ವೌಲ್ಯ ಹಾಗೂ ವ್ಯವಸ್ಥೆಯನ್ನು ಹಿಂದುತ್ವ ಭ್ರಷ್ಟಗೊಳಿಸಿರುವುದು. ನಾಗರಿಕ ಸಮಾಜದಲ್ಲಿ ನ್ಯಾಯ ಪ್ರಜ್ಞೆ ನಶಿಸುತ್ತಿರುವುದು. ಜಾಗತೀಕರಣ ಮತ್ತು ಹಿಂದುತ್ವದ ನಡುವಿನ ಸಂಬಂಧಗಳು ಗಟ್ಟಿಗೊಳ್ಳುತ್ತಿರುವುದು ನಮ್ಮ ದೌರ್ಬಲ್ಯದ ಸಂಕೇತ. ಸತ್ತು ಹೋದ ನಮ್ಮ ಮನಸ್ಸುಗಳ ಮೇಲೆ ಕೋಮುವಾದ ಸವಾರಿ ನಡೆಸುತ್ತಿದೆ ಎಂದು ಶಿವಸುಂದರ್ ಹೇಳಿದರು.ಈ ಸಂದರ್ಭದಲ್ಲಿ ಪಿಯುಸಿಎಲ್ನ ಡಾ.ರಾಮದಾಸ್ ರಾವ್, ಲೇಖಕ ಎಚ್.ಎಲ್.ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ