ಗುರುವಾರ, ಡಿಸೆಂಬರ್ 09, 2010

ಬಿಜೆಪಿ ಅಭ್ಯರ್ಥಿ ಸೋತ ಗ್ರಾಮಕ್ಕೆ ಜೀವನ ಪರ್ಯಂತ ಕಾಲಿಡಲ್ಲ: ಯಡಿಯೂರಪ್ಪ ಶಪಥ !!!!!!!!!!!!!!!!

ಬಿಜೆಪಿ ಅಭ್ಯರ್ಥಿ ಸೋತ ಗ್ರಾಮಕ್ಕೆ ಜೀವನ ಪರ್ಯಂತ ಕಾಲಿಡಲ್ಲ: ಯಡಿಯೂರಪ್ಪ ಶಪಥ! ಶಿವಮೊಗ್ಗ, ಡಿ. 9: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಶಿಕಾರಿಪುರ ತಾಲೂಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಬೇಕು. ಯಾವುದಾ ದರೂ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸೋತಲ್ಲಿ ಜೀವನ ಪರ್ಯಂತ ಆ ಗ್ರಾಮಗಳಿಗೆ ಕಾಲಿಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುವ ಮೂಲಕ ಶಿಕಾರಿಪುರ ಜನತೆಗೆ ಶಾಕ್ ನೀಡಿದ್ದಾರೆ.


ಶಿಕಾರಿಪುರ ಪಟ್ಟಣದ ಜೈನ ಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಕೊಡುಗೆಯಾಗಿ ತಾಲೂಕಿ ನಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನೆ ಗೆಲ್ಲಿಸಿ ಎಂದು ಅವರು ಮತದಾರರಿಗೆ ಮನವಿ ಮಾಡಿದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ