ರಾಜಕೀಯದಲ್ಲಿ ಮಾತ್ರವಲ್ಲ, ಭ್ರಷ್ಟಾಚಾರವು ವಿಶ್ವವ್ಯಾಪಿ : ನ್ಯಾ.ಸಂತೋಷ್ ಹೆಗ್ಡೆ
ಬೆಂಗಳೂರು, ಡಿ.10: ರಾಜಕೀಯದಲ್ಲಿ ಮಾತ್ರವಲ್ಲ, ಭ್ರಷ್ಟಾಚಾರವು ಇಂದು ವಿಶ್ವವ್ಯಾಪಿಯಾಗಿದೆ. ಭ್ರಷ್ಟಾಚಾರವು ಇಷ್ಟೊಂದು ವ್ಯಾಪಕ ಪಿಡುಗಾಗಿ ವ್ಯಾಪಿಸಲು ಸಮಾಜವು ಕೂಡಾ ಕಾರಣವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಮಾತನಾಡುತ್ತಿದ್ದರು.
ಸ್ವಲ್ಪವೂ ಭ್ರಷ್ಟಾಚಾರವಿಲ್ಲದೆ ಸಂಸ್ಥೆ ಯಾವುದೂ ಇಲ್ಲ. ಭ್ರಷ್ಟಾಚಾರವು ಇಂದು ಸಮಾಜಕ್ಕೆ ದೊಡ್ಡ ತಪ್ಪಾಗೇನು ಕಾಣಿಸದಿರುವುದು ದೊಡ್ಡ ದುರಂತ. ಏಕೆಂದರೆ ಭ್ರಷ್ಟರಿಗೆ ಇಂದು ಸಮಾವೇಶಗಳಲ್ಲಿ ಸನ್ಮಾನ ಮಾಡಲಾಗುತ್ತಿದೆ ಎಂದು ಸಂತೋಷ್ ಹೆಗ್ಡೆ ಖೇದ ವ್ಯಕ್ತಪಡಿಸಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ