ಬುಧವಾರ, ಫೆಬ್ರವರಿ 16, 2011

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ವತಿಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಉಪ್ಪಿನಂಗಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಉಪ್ಪಿನಂಗಡಿ ವಲಯದ ವತಿಯಿಂದ ಬಂಟ್ವಾಳ ತಾಲೂಕಿನ ಬಿಳಿಯೂರಿನ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡಲಾಯಿತು.
ನಿವಾಸ ಹಸ್ತಾಂತರ ಕಾರ್ಯಕ್ರಮವು ಫೆಬ್ರವರಿ 14ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ದಿವಂಗತ ಇಬ್ರಾಹೀಂ ಮತ್ತು ನೆಬಿಸಾ ದಂಪತಿಯ ಮಕ್ಕಳಾದ ಝೀನತ್ ಹಾಗೂ ಹನೀಫ್‌ಗೆ ಬೀಗದ ಕೈ ಹಸ್ತಾಂತರಿಸಿದರು.
ಹಾಜಿ ಕೆ.ಬಿ.ಅಬ್ಬಾಸ್ ಸಅದಿ ಪೆರ್ನೆ ಕಾರ್ಯಕ್ರಮ ಉದ್ಘಾಟಿಸಿದರು. ಝಕರಿಯಾ ದಾರಿಮಿ, ಶುಕೂರ್ ಹಾಜಿ ಉಪ್ಪಿನಂಗಡಿ, ಹಾರೂನ್ ರಶೀದ್ ಅಗ್ನಾಡಿ, ಕೆ.ಸಿದ್ದೀಕ್ ಪುತ್ತೂರು, ಆದಂ ಬಿಳಿಯೂರು, ಅಬ್ದುಲ್ ರಝಾಕ್ ಸೀಮಾ, ಹಮೀದ್ ಮೆಜೆಸ್ಟಿಕ್, ನ್ಯಾಯವಾದಿ ಅಶ್ರಫ್ ಅಗ್ನಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿ.ಮುಸ್ತಫಾ ಸ್ವಾಗತಿಸಿ, ಮುಸ್ತಫಾ ಪೆರ್ನೆ ವಂದಿಸಿದರೆ, ಝಕರಿಯ್ಯ ಕೊಡಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Elyas Thumbe

Elyas Thumbe

1 ಕಾಮೆಂಟ್‌: