ಭಾನುವಾರ, ಫೆಬ್ರವರಿ 13, 2011

ಫೆ.27: ಮಂಗಳೂರಿನಲ್ಲಿ ಸಿಎಫ್‌ಐ ರಾಜ್ಯ ಸಮಾವೇಶ

ಮಂಗಳೂರು, ಫೆ.13: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ)ದ ಕರ್ನಾಟಕ ರಾಜ್ಯ ಸಮಾವೇಶವು ಫೆ.27 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ.
 ವಿದ್ಯಾರ್ಥಿಗಳನ್ನು ಚಳವಳಿಗಳ ಮೂಲಕ ಸಬಲೀಕರಣ ಗೊಳಿಸುವ ಸಲುವಾಗಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿದ್ಯಾರ್ಥಿ ರ್ಯಾಲಿಯನ್ನು ಆಯೋಜಿಸಿದ್ದು, ವಿವಿಧ ರೀತಿಯ ಸ್ತಬ್ಧಚಿತ್ರ ಗಳು, ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ತಂಡಗಳು ರ್ಯಾಲಿ ಯಲ್ಲಿ ಪಾಲ್ಗೊಳ್ಳಲಿವೆೆ. ಅಂದು ಸಂಜೆ 4:30ಕ್ಕೆ ಸಾರ್ವಜನಿಕ ಸಮಾವೇಶ ಜರಗಲಿದೆ ಎಂದು ಅಬ್ದುರ್ರಹ್ಮಾನ್ ತಿಳಿಸಿದ್ದಾರೆ.

1 ಕಾಮೆಂಟ್‌: